Wednesday 20 February 2008

ಸಖ ಗೀತ

ಇವನ ಬಗ್ಗೆ ಬರೆಯಬೇಕಂತೆ-
ಬರವಣಿಗೆ ಎಂದರೇನು ಅಮಟೆಕಾಯಿಯಾ
ಕಲ್ಲು ಹೊಡೆದ ಮರುಕ್ಷಣ ಮಡಿಲಲ್ಲಿ ಬೀಳಲು
ಎಂದರೆ,
ತಲೆ ಮೇಲೆ ನಕ್ಷತ್ರವನ್ನೇ ಉದುರಿಸುವಷ್ಟು
ರೊಮ್ಯಾಂಟಿಕ್ ಆಗಿ ಕಣ್ ಹೊಡೆಯುವ
ಇವನ ಬಗ್ಗೆ ಬರೆಯಬೇಕಂತೆ!

ಇವನಿಗಾಗಿ ಹಾಡಬೇಕಂತೆ-
ಹಾಡುವಾಗ ಸಾಲು ಮರೆತರೆ
ನೀ ಸಾಥ್ ಕೊಡುವೆಯಾ
ಎಂದರೆ,
ಕಣ್ಮಿಟುಕಿಸಿ, ಗಂಟಲು ಸರಿಮಾಡಿ
‘ಲವ್ಯೂ...’ ಎಂದೊದರುವ
ಇವನಿಗಾಗಿ ಹಾಡಬೇಕಂತೆ !

ಇವನಿಗಾಗಿ ಬದುಕಬೇಕಂತೆ-
ನನ್ಬದುಕೆಲ್ಲ ನೀನೇ ಅಲ್ಲವೇನೋ...
ಎಂದರೆ,
ಪುಟಾಣಿ ಮಡಿಲಲ್ಲಿ ಅಡಗುವ
ಮಾತೇ ಬರದಷ್ಟು ಭಾವುಕನಾಗುವ
ಇವನಿಲ್ಲದೇ
ಬದುಕು ಖುಷಿಯಾಗಿರುವುದಾದರೂ ಹೇಗೆ..?

9 comments:

ಶಾಂತಲಾ ಭಂಡಿ (ಸನ್ನಿಧಿ) said...

ಗೆಳತಿ...
ಸೂಪರ್...

"ತಲೆ ಮೇಲೆ ನಕ್ಷತ್ರವನ್ನೇ ಉದುರಿಸುವಷ್ಟು
ರೊಮ್ಯಾಂಟಿಕ್ ಆಗಿ ಕಣ್ ಹೊಡೆಯುವ
ಇವನ ಬಗ್ಗೆ ಬರೆಯಬೇಕಂತೆ!"

ಹಿಂಗೇ ಎಲ್ಲ ಸಾಲೂ ಮಸ್ತ್....
ಹಂ..ಬರಿ, ಬರಿ...ಓದ್ತಾ ಇರ್ತಿ.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಶಾಂತಲಾ,
ಥಾಂಕ್ಯೂ... :)

ವಿ.ರಾ.ಹೆ. said...

ನಮಸ್ತೇ ಪೂರ್ಣಿಮಾ,

ತೇಜಸ್ವಿನಿ ಹೆಗಡೆಯವರ ಬ್ಲಾಗ್ ಮೂಲಕ ಇಲ್ಲಿಗೆ ಬಂದೆ.
ಕವನ ಸೂಪರ್. ಒಂಥರಾ different approach ಚೆನ್ನಾಗನ್ನಿಸ್ತು.

ಆ ನಿಮ್ಮ ’ಅಜ್ಜಿ’ಗೆ ಬರೆದ ಕವನ ಕೂಡ ಇಷ್ಟವಾಯಿತು.
ಬರೀತಾ ಇರಿ.

-ವಿಕಾಸ್

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ವಿಕಾಸ್,
ಥಾಂಕ್ಸ್ ರೀ...
ಹ್ಮ್, ಅಜ್ಜಿ.. ನಂಗೆ ಯಾವತ್ತೂ ಖುಶಿ-ಖುಶಿ ನೆನಪು ಕೊಡೋವ್ರು... :)

Anonymous said...

Hey poorni...super agi ide ee poem..sakkat maja banthu odii..good going poorni..hege baritariu..

ಶ್ರೀನಿಧಿ.ಡಿ.ಎಸ್ said...

super kavana:)

ಹರಿಹರಪುರ ಶ್ರೀಧರ್ said...

sogasaagidhe. heegirabekappaa kavana andhre. eshtu saleesaagi odhisikondu hoguththe.dhanyavaadhagalu. bareethaa iri.
hariharapurasridhar

shivu.k said...

ಪೂರ್ಣಿಮಾ ಮೇಡಮ್,

ತುಂಬಾ ಚೆನ್ನಾಗಿದೆ..ಕವನ...

ಮೊದಲು ಹುಸಿಕೋಪ...ಅದ್ರೆ ಒಳಗೆಲ್ಲೋ ಒಳಪ್ರೀತಿ...ಇದು ಚೆನ್ನಾಗಿ ಬಿಂಬಿತವಾಗಿದೆ...ಮತ್ತು ತುಂಬಾ ಸರಳವಾಗಿದೆ....

ಬರವಣಿಗೆ ಎಂದರೇನು ಅಮಟೆಕಾಯಿಯಾ
ಕಲ್ಲು ಹೊಡೆದ ಮರುಕ್ಷಣ ಮಡಿಲಲ್ಲಿ ಬೀಳಲು.....
ಈ ಸಾಲುಗಳು ಸಕ್ಕತ್ ಕ್ಯಾಚಿಯಾಗಿದೆ....ಅಹ.. ಅಹ...ಥ್ಯಾಂಕ್ಸ್.... ಹೀಗೆ ಬರೆಯುತ್ತಿರಿ....

Anonymous said...

ಚಂದ ಕವಿತೆ..